Tuesday, August 24, 2010

ನಾವು(ನು) ಜಾಗೃತವಾಗುವುದೆಂದು???!!!!

ಪವಿತ್ರ ರಂಜಾನ್ ನ ಈ ಸಂದರ್ಭದಲ್ಲಿ ಎಲ್ಲ ಮುಸ್ಲೀಂ ಬಾಂಧವರಿಗೂ ಶುಭಕಾಮನೆಗಳು.

ಕಳೆದ ವಾರ ಊರಿಗೆ ಖಾಸಗಿ ಬಸ್ಸಿನಲ್ಲಿ ಹೊರಟಿದ್ದೆ, ಮುಂಜಾನೆ ೬ ಗಂಟೆ ಹೊತ್ತಿಗೆ ಬಸ್ಸು ಸಾಗರ ತಲುಪಿತು. ಸಾಗರ ಪೇಟೆ ದಾಟಿ, ಪಿಯು ಕಾಲೇಜಿನ ಸಮೀಪ ಬಸ್ಸು ಇದ್ದಕ್ಕಿದ್ದಂತೆ ನಿಂತಿತು. ಮೂವರು ಮುಸ್ಲೀಂ ಪುರುಷರು ಗಡಿಬಿಡಿಯಲ್ಲಿ ಬಸ್ಸು ಇಳಿದರು. ನಾನು ಭಯಮಿಶ್ರಿತ ಕುತೂಹಲದಿಂದ ನೋಡತೊಡಗಿದೆ. ಅವರು ಇಳಿದೊಡನೆ ಬಾಟಲಿನ ನೀರಿನಿಂದ ಕಾಲು ತೊಳೆದು, ತಾವು ತಂದಿದ್ದ ಚಾದರವನ್ನು ನೆಲಕ್ಕೆ ಹಾಸಿ ಪ್ರಾರ್ಥನೆ ಆರಂಭಿಸಿದರು. ಅವರ ಪ್ರಾರ್ಥನೆ ಹಾಗೆ ೧೦ ನಿಮಿಷದವರೆಗೂ ಮುಂದುವರೆದು ನಂತರ ಬಸ್ಸು ಹತ್ತಿ ತಮ್ಮ ಪಾಡಿಗೆ ತಾವು ಕುಳಿತರು.

ಇವಿಷ್ಟು ನಡೆದ ಘಟನೆ. ಕೆಲವರಿಗೆ ಇದು ಒಂದು ಸಹಜ ಘಟನೆ ಅನ್ನಿಸಬಹುದು, ಇನ್ನು ಕೆಲವರಿಗೆ ಇದು ಸಹಜ ಅಲ್ಲ ಅನ್ನಿಸಬಹುದು. ಇದು ಅವರವರು ಬೆಂಬಲಿಸುವ ರಾಜಕೀಯ ಪಕ್ಷವನ್ನು ಅವಲಂಬಿಸಿರಬಹುದು!!

ಈ ಘಟನೆ ನೋಡುತ್ತಿದ್ದಾಗ ಮತ್ತು ನಂತರ ನನ್ನಲ್ಲಾದ ಆಲೋಚನೆಗಳು ಮತ್ತು ಎದ್ದ ಪ್ರಶ್ನೆಗಳನ್ನು ಇಲ್ಲಿ ಅಕ್ಷರವಾಗಿಸಿದ್ದೇನಷ್ಟೆ.

ಅವರು ಪ್ರಾರ್ಥನೆ ಆರಂಬಿಸಿದ ಕೂಡಲೇ ನನಗೆ ಅನ್ನಿಸಿದ್ದು, ಈ ಘಟನೆಯ ಒಂದು ಫೋಟೊ ತೆಗೆದುಕೊಳ್ಳಬೇಕೆಂದೆನಿಸಿತು, ಕೂಡಲೇ ಮನಸ್ಸು ಅದರ ಪರಿಣಾಮದ ಬಗೆಗೆ ಯೋಚಿಸಿತು. ನಾನು ಫೋಟೊ ತೆಗೆಯುವುದಕ್ಕೆ ಅವರು ಪ್ರತಿಭಟಿಸಿದರೆ? ಪ್ರತಿಭಟಿಸದರೂ ಚಿಂತೆಯಿಲ್ಲ, ಆದರೆ ಬಸ್ಸಿನಲ್ಲಿದ್ದ ಉಳಿದವರು ನನ್ನ ಬೆಂಬಲಿಸದಿದ್ದರೆ? ಇದು ದೊಡ್ಡ ಕೋಮು ಗಲಭೆಗೆ ಕಾರಣವಾಗಿಬಿಟ್ಟರೆ? ಇಷ್ಟೆಲ್ಲ ಯೋಚಿಸಿ, ಫೋಟೊ ತೆಗೆಯುವ ವಿಚಾರ ಅಲ್ಲಿಗೇ ಬಿಟ್ಟೆ.
ಆಷ್ಟರಲ್ಲಿ ಅವರು ಪ್ರಾರ್ಥನೆ ಮುಗಿಸಿ ಬಸ್ಸೇರಿದರು. ಅವರು ಪ್ರಾರ್ಥಿಸಿದ್ದಕ್ಕೆ ನನಗೆ ಕಿಂಚಿತ್ತೂ ಬೇಸರವಿರಲಿಲ್ಲ, ಆದರೆ ಇದಕ್ಕೆ ಅವಕಾಶ ನೀಡಿದ ಬಸ್ಸಿನ ಸಿಬ್ಬಂದಿಗೆ ಒಂದು ಧನ್ಯವಾದ ಹೇಳಬಹುದಿತ್ತು ಅನ್ನಿಸದ್ದಂತೂ ನಿಜ.

ಒಂದೊಮ್ಮೆ ಒಬ್ಬ ಹಿಂದು ಸಂಧ್ಯ್ಯಾವಂದನೆ ಮಾಡಬೇಕು ೫ ನಿಮಿಷ ಬಸ್ಸು ನಿಲ್ಲಿಸಿ ಅಂತ ಕೇಳಿಕೊಂಡರೆ ಬಸ್ಸು ನಿಲ್ಲಿಸಿತ್ತಿದ್ದರೇ? ಒಂದೊಮ್ಮೆ ಬಸ್ಸಿನ ಸಿಬ್ಬಂದಿ ಅವಕಾಶ ನೀಡಿದರೂ, ಸಹಪ್ರಯಾಣಿಕರ ಪ್ರತಿಕ್ರಿಯೆ ಹೇಗಿರುತ್ತಿತ್ತು?
"ನಮಗೆ ಲೇಟ್ ಆಗುತ್ತೆ, ನಿನ್ನ ಪೂಜೆ ಮನೇಲಿ ಇಟ್ಕ"
"ನಿನ್ನೊಬ್ಬನಿಗಾಗಿ ನಾವೇಕೆ ಕಾಯಬೇಕು? ರೀ ಡ್ರೈವರ್, ನೀವೇಕೆ ಬಸ್ಸು ನಿಲ್ಲಿಸಿದ್ದು?"
.
.
.
ಅಂತ ತಲೆಗೊಬ್ಬರು ಮಾತನಾಡುತ್ತ್ತಿದ್ದರು.
ಗಮನಿಸಿ ಈ ತರಹದ ಪ್ರತಿಕ್ರಿಯೆ ನೀಡುವವರು ಅನ್ಯ ಧರ್ಮೀಯರಲ್ಲ, ಎಲ್ಲ ನಮ್ಮವರೇ.

ಹಾಗಾದರೆ, ಆ ಮುಸ್ಲೀಮರು ಪ್ರಾರ್ಥನೆ ಮಾಡುವಾಗ ನನ್ನೂ ಸೇರಿದಂತೆ ಎಲ್ಲರೂ ತುಟಿ ಪಿಟಕ್ಕೆನ್ನದೇ ಇದ್ದುದೇಕೆ? ಎಲ್ಲರಿಗೂ ಬಹುಶಃ ನನಗೆ ಅನಿಸಿದ ಹಾಗೆ ಅನಿಸಿರಬೇಕಲ್ಲವೇ?

ಅಂದರೆ ನಮ್ಮ ಸಮಾಜದಲ್ಲಿ ಎಂತ ವಾತಾವರಣ ಸೃಷ್ಟಿಯಾಗಿದೆ ಅಂದರೆ ಹಿಂದೂಗಳು ಏನೇ ಮಾಡಿದರೂ ಪ್ರತಿಭಟಿಸಬಹುದು, ಆದರೆ ಅಲ್ಪಸಂಖ್ಯಾತರೂ ಏನೇ ಮಾಡಿದರೂ ಪ್ರತಿಭಟಿಸುವಂತಿಲ್ಲ. ಇದಕ್ಕೆ ನಮ್ಮ ರಾಜಕೀಯ ಪಕ್ಷಗಳೂ ಸೇರಿದಂತೆ, ನಮ್ಮ ದೇಶದಲ್ಲಿರುವ ಕಾನೂನು ಮತ್ತು ಅಲ್ಪಸಂಖ್ಯಾತರಿಗಿರುವ ವಿಶೇಷ ಸವಲತ್ತುಗಳು ಕಾರಣ ಅನ್ನಿಸುತ್ತಿಲ್ಲವೆ? ನಮ್ಮ ದೇಶದಲ್ಲಿಯೇ ನಾವು ಭಯದಿಂದ ಜೀವಿಸಬೇಕೆ?

ರಾಜಕೀಯಪಕ್ಷಗಳ ಧೋರಣೆ ಗಮನಿಸಿದರೆ, ಒಂದು ಗಾದೆ ನೆನಪಿಗೆ ಬರುತ್ತೆ "ಮನೆಗೆ ಮಾರಿ, ಊರಿಗೆ ಉಪಕಾರಿ".

ನಾವು(ನು) ಜಾಗೃತವಾಗುವುದೆಂದು???!!!!