Monday, June 28, 2010

ಮಲೆನಾಡಿನ ಮಳೆಗಾಲದಲ್ಲೊಂದು ದಿನ

ತುಂಬಾ ದಿನಗಳ ನಂತರ ಮಳೆಯಲ್ಲಿ ಕೊಡೆ ಹಿಡಿದು ನಡೆಯುತ್ತಿದ್ದೆ. ಕಳೆದುಕೊಂಡ ಅಪೂರ್ವವಾದ ಕ್ಷಣಗಳನ್ನು ಮತ್ತೆ ಅನುಭವಿಸುತ್ತಿದ್ದೆ. ಕೊಡೆ ಮೇಲೆ ಮಳೆಹನಿ ಬಿದ್ದಾಗ ಹೊರಡುವ ಟಪ್ ಟಪ್ ಸದ್ದು, ಚಪ್ಪಲಿನಿಂದ ಹೊರಡುವ ಚೀಂವ್ ಚೀಂವ್ ಶಬ್ದ, ರಸ್ತೆ ಬದಿಯ ಕಿಸಗಾರ (ದಾಸವಾಳ) ಹಣ್ಣು ಕೀಳುವ ಖುಷಿ, ಇನ್ನೂ ಏನೇನೋ.......!
ಸತ್ಯ ಏನೆಂದರೆ ಕಳೆದುಕೊಳ್ಳುವವರೆಗೂ ಇವು ಅಪೂರ್ವವಾದುದೆಂದು ಅನ್ನಿಸಿರಲೇ ಇಲ್ಲ.
ನಾನು ಅನುಭವಿಸಿದ್ದನ್ನು ಹಂಚಿಕೊಳ್ಳುವ ಅನ್ನಿಸಿತು... ಕೆಲವು ಕ್ಷಣಗಳು ನಿಮಗಾಗಿ.







1 comment:

ajjakana raama said...

ಚೆನ್ನಾಗಿದೆ